Choose Language:

Basavaraju K S

  • Group:art exhibition

Basavaraju K S

ಬಸವರಾಜು ಕೆ. ಎಸ್ 

ತುಮಕೂರು ಮೂಲದ ವರ್ಣಚಿತ್ರ ಕಲಾವಿದ ಬಸವರಾಜು ಕೆ. ಎಸ್. ಕರ್ನಾಟಕ ಲಲಿತ ಕಲಾ ಅಕಾಡೆಮಿಯಲ್ಲಿ ವಾರ್ಷಿಕ ಪ್ರದರ್ಶನ, ಬಾಂಬೆ ಕಲಾ ಪ್ರದರ್ಶನ, ಪುಣೆಯಲ್ಲಿ ಲೋಕಮಾನ್ಯ ತಿಲಕ್ ಕಲಾ ಪ್ರದರ್ಶನ, ಅಖಿಲ ಭಾರತ ಮೈಸೂರು ದಸರಾ ಪ್ರದರ್ಶನ, ಕೋಲ್ಕತ್ತಾದ ಬಿರ್ಲಾ ಅಕಾಡೆಮಿ ಕಲಾ ಪ್ರದರ್ಶನ, ಎಐಎಫ್‌ಎಸಿಎಸ್ ಕರ್ನಾಟಕ ರಾಜ್ಯ ಪ್ರದರ್ಶನ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು ತುಮಕೂರಿನ ರವೀಂದ್ರ ಕಲಾನಿಕೇತನ, ಮೈಸೂರಿನ ಶ್ರೀ ಕಲಾನಿಕೇತನ ಆರ್ಟ್ ಗ್ಯಾಲರಿ ಮತ್ತು ತುಮಕೂರಿನ ಬಿರ್ಲಾ ಆಡಿಟೋರಿಯಂನಲ್ಲಿ ನಡೆದಿವೆ. ಬಸವರಾಜು ಅವರಿಗೆ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 48 ನೇ ಕರ್ನಾಟಕ ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ರಜತ ಮಹೋತ್ಸವ ಪ್ರಶಸ್ತಿ, ಮತ್ತು AIFACS ಪ್ರಶಸ್ತಿ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಸಂದಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo