Choose Language:

S Gangadaraiah

ಎಸ್  ಗಂಗಾಧರಯ್ಯ
ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಎಸ್. ಗಂಗಾಧರಯ್ಯ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.
‘ನವಿಲ ನೆಲ’, ‘ಒಂದು ಉದ್ದನೆಯ ನೆರಳು’, ಇವರ ಕಥಾ ಸಂಕಲನಗಳು. ‘ಬಯಲ ಪರಿಮಳ’ ಎಂಬ ವ್ಯಕ್ತಿಚಿತ್ರ ಸಂಪುಟವನ್ನು ರಚಿಸಿದ್ದಾರೆ. ವೈಕಂ ಅವರ ಕಥೆಗಳು, ಲೋರ್ಕಾ ನಾಟಕ, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ಇವುಗಳನ್ನು ಕನ್ನಡೀಕರಿಸಿದ್ದಾರೆ.
ಕುವೆಂಪು ಭಾಷಾಭಾರತಿಗಾಗಿ ’ಆಫ್ರಿಕನ್ ಸಾಹಿತ್ಯವಾಚಿಕೆ’, ಮತ್ತು ಡಾ. ರಾಮಮನೋಹರ ಲೋಹಿಯಾ ಮತ್ತು ಜಗಜೀವನರಾಂ ಸಮಗ್ರ ಕೃತಿಗಳಿಗಾಗಿ ಲೇಖನಗಳ ಅನುವಾದವನ್ನು ಮಾಡಿದ್ದಾರೆ. ಇವರ ’ವೈಕಂ ಕಥೆಗಳು’ ಕೃತಿಗೆ 1996 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo